ಮಂಗಳವಾರ, ಸೆಪ್ಟೆಂಬರ್ 13, 2011

ಪಯಣ ಮತ್ತದೇ ಬೆಂಗಾಡಿಗೆ

ನನ್ನ ಬಿಳಿಯ ಬಣ್ಣದ
ಕರವಸ್ತ್ರದ ಮುಖವೂ
ಕೆಂಪಗಾಗಿತ್ತು ಧೂಳ
ಸಿಂಚನವನುಂಡು....
ಕೆಸರ ರಾಡಿಯೊಳಗಿಂದ
ಎದ್ದು ಬಂದ ಹಂದಿಯದೂ
ಸವಿ ಚೀತ್ಕಾರ, ಶುಭಸ್ವಾಗತ,
ಜಡಿ ಮಳೆಗೆ ಹಿಡಿ ಶಾಪ
ಸೆಗಣಿ, ಧೂಳುಗಳೆಲ್ಲದರ
ವರ್ಣ ಚಿತ್ತಾರ ನಾ ತೊಟ್ಟ
ನೀಲಿ ಜೀನ್ಸಿನಲೂ ವೈಯಾರ..
ಕಿವಿಗಡರಿದ "ಏನ್ರೀ ಸರ್ರ"
ಆರಾಮದಿರೇನು? ಗಳ ನಡುವೆ
ಕ್ಷಣ ನಿಟ್ಟುಸಿರು ಬಿಟ್ಟು "ಹ್ಞೂ ರೀ"
"ಯಪ್ಪಾ", "ನೀವ್ರಿ ಸರ್ರ" ಮರು
ಪ್ರಶ್ನೆ ಒಗೆದಿದ್ದೆ .. ಕಾಲ ಮರೆಸಿತ್ತು
ಇಂದು ಪಯಣ ಮತ್ತದೇ ಬೆಂಗಾಡಿಗೆ
ರೊಕ್ಕದ ಬೆನ್ನ ಹತ್ತಿ, ಪಾದಗಳಿಗೆ
ಧೂಳು ಸೆಗಣಿಗಳ ನೆನಪ ಬಿಟ್ಟು.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ