ಶುಕ್ರವಾರ, ಅಕ್ಟೋಬರ್ 21, 2011

ನನ್ನ ಕವಿತೆಯೆಂಬ ಗುಲಾಬಿ ಮತ್ತು ಕೃತಿಚೌರ್ಯ...

ಬಣ್ಣ ಕೆಂಪು ಪಕಳೆಗಳದ್ದು, ಹಸುರ ನಡುವೆ
ನಗುವ ಸೂಸಿ ನಿಂತ ಪರಿ ಕಷ್ಟವಿಲ್ಲದೆ
ಗಾಳಿ ಕೂಡ ಮುತ್ತನಿತ್ತು ಬೇದವಿಲ್ಲದೆ
ಅರಳಿ ನಿಂತ ಗುಲಾಬಿಯ ಚೆಲುವ ಕಂಡು
ನೀಲಾಕಾಶದಿ ಉರಿವ ಸೂರ್ಯನು ಮೋಹಿ
ಕಿರಣಗಳೆಂಬ ಮನ್ಮಥ ಬಾಣವ ಹೂಡಿ..
ಬೇರು ತಾನು ಮಣ್ಣ ಕೆದಕಿ ಸಾರ ಹೀರಿ
ತುತ್ತನಿತ್ತ ನೋವ ಬಲ್ಲವನಾರು ಬಣ್ಣವೀಯಲು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ